ಮೊಗಳ್ಳಿಯವರು ಆತ್ಮಕಥೆ ನಿರೂಪಣೆ ಸಂಪ್ರದಾಯದಲ್ಲಿ ಹೊಸ ಹಾದಿಯನ್ನೇ ಕಾಣಿಸಿದ್ದಾರೆ. ಮೊಗಳ್ಳಿಯವರ ಕಾವ್ಯಾತ್ಮಕ ವರ್ಣನೆ ಅವರು ಕಂಡ ದುಃಖ, ನೋವು, ಅಕ್ಕರೆಗಳ ಸತ್ಯವನ್ನು ನಾವೂ ಮತ್ತೆ ಕಾಣುವಂತೆ ಈ ಕೃತಿ ಮಾಡುತ್ತದೆ. ಕಾಲ್ಪನಿಕ ಮತ್ತು ನೈಜ ಎಂಬ ವಿಭಜನೆಯನ್ನು ಮೀರಿ ತಾವು ಅನುಭವಿಸಿದ ಕ್ರೌರ್ಯವನ್ನು ವಿವರಿಸುತ್ತಲೇ ಅದರ ಜೊತೆಯಲ್ಲಿ ಕಂಡ ದಯೆ, ವಿಸ್ಮಯ ಮತ್ತು ನಿಗೂಢತೆಗಳಿಗೂ ಎಚ್ಚರವನ್ನು ತೋರಿಸುವ ಸಂಕೀರ್ಣ ಕಥನವಿದು. ಕಟು ವಾಸ್ತವದೆದುರು ಆತ್ಮ ಸ್ಥೆರ್ಯವನ್ನು ಕಳೆದು ಕೊಳ್ಳದೆ ಜೀವನವನ್ನು ತೀಕ್ಷ್ಮವಾಗಿ ಗಮನಿಸುತ್ತಾ ಜೀವಿಸುವ ಶಕ್ತಿಯನ್ನು ಉಳಿಸಿ ಕೊಂಡ ಮೊಗಳ್ಳಿ ಅವರು ತಮ್ಮ ಅನುಭವ ಲೋಕವನ್ನು ಕಟ್ಟಿ ಕೊಡುವ ಮೂಲಕ ಬದುಕಿನ ತೀವ್ರತೆಯನ್ನು ಸ್ಪರ್ಶಿಸುವಂತಹ ಹೊಸ ಅರಿವು ಮತ್ತು ಮಾನವೀಯತೆಯ ಹೊಸ ಸಂವೇದನೆಗಳನ್ನು ದೊರಕಿಸಿದ್ದಾರೆ.











Reviews
There are no reviews yet.