ಜಯಂತ ಕಾಯ್ಕಿಣಿ ಅವರ ಕಥಾಸಂಕಲನ ‘ಚಾರ್ ಮಿನಾರ್’ – ಮುಂಬೈ ಎಂಬ ಮಹಾನಗರ ಕುತೂಹಲದ ಕಣ್ಣುಗಳಿಂದ ನೋಡಿದವರು ಅದೆಷ್ಟು ಚಂದ ಅಕ್ಷರಕ್ಕೆ ದುಡಿಸಿಕೊಂಡರೋ? ಮಹಾ ನಗರಗಳಿಗೆ ಹೊಟ್ಟೆಪಾಡಿಗಾಗಿ ಹೊರಟು ನಿಂತಾಗ ಅಲ್ಲಿ ಕಾಣುವುದೆಲ್ಲವೂ ಬದುಕಿನ ನಾಟಕಗಳೆಂದು ಮರೆತು ಬಿಡುತ್ತೇವೆ. ಕಥೆಗಾರ ಹಾಗಲ್ಲ, ಟ್ರಾಫಿಕ್ ಜಾಂ ನ್ನು ಎಂಜಾಯ್ ಮಾಡುತ್ತಾರೆ. ಕಹಿ- ಸಿಹಿ ಘಟನೆಗಳನ್ನು ಕಥೆಯಾಗಿಸುತ್ತಾರೆ. ಬಹುಶಃ ಕಾಯ್ಕಿಣಿಯವರಿಗೆ ಮಾತ್ರ ಒಲಿದಂಥದ್ದು, ಆ ಮಹಾ ನಗರವನ್ನೇ ಫ್ಲೈಯಿಂಗ್ ಕ್ಯಾಮರಾದಂತೆ ದಶ ದಿಕ್ಕುಗಳನ್ನೂ ನೋಡುವ ಅವರ ಗ್ರಹಿಕೆ ಅತಿ ಸೂಕ್ಷ್ಮ. ಒಬ್ಬ ಮಿಡಲ್ ಕ್ಲಾಸ್, ಇನ್ನೊಬ್ಬ ತಳ ವರ್ಗದ ಟಾಕ್ಸಿ ಡ್ರೈವರ್ ಇನ್ನೊಬ್ಬ ಶ್ರೀಮಂತ ಆ ಮಹಾ ಮಳೆಯಲ್ಲಿ ಟ್ರಾಫಿಕ್ ನ ಸಿಕ್ಕಿನಲ್ಲಿ ಬದುಕು ಅರ್ಥೈಸಿಕೊಳ್ಳುವುದೆಷ್ಟು ಚಂದ. ಒಂದು ಮಹಾ ಮಳಡ ಅರ್ಥಾತ್ ನೀರು ಅಷ್ಟು ಸಾಮಾಜಿಕ ಬದಲಾವಣೆ ತರುವ ಆಧುನಿಕ ಶೈಲಿ ಇದು. ನಗರದ ಜಂಜಡಗಳನ್ನೂ ಕಥೆ ಯಾಗಿಸಬಹುದೆಂಬುವುದು ಕಾಯ್ಕಿಣಿಯವರಿಂದ ಕಲಿಬೇಕು.











Reviews
There are no reviews yet.