ರೈತರಃ ಈ ದೇಶವನ್ನು, ರಾಜ್ಯವನ್ನು ತಾಪಾಡೋರು, ಯಾವ್ಯಾವಾಗ ರೈತ ಸಂಘಟನೆಗಳು ಸಂಘಟಿತವಾಗಿ ಹೋರಾಟ ಮಾಡಿದ್ದಾನೆಯೋ ಆಗೆಲ್ಲ ಪ್ರಭುತ್ವದ ಸರ್ವಾಧಿಕಾರಿ ಧೋರಣೆ, ದನನಕಾರಿ ಪ್ರವೃತ್ತಿಗಳಿಗೆ ಪೆಟ್ಟು ಬಿದ್ದಿದೆ. ಆದರೆ ರೈತ ಸಂಘಟನೆಯೊಳಗೆ ಶುರು ಆಗತ್ತಲ್ಲ ಒಳ ಜಗಳಗಳು, ಜಾತಿವಾದಿ ಧೋರಣೆಗಳು, ಗುಂಪುಗಾರಿಕೆ, ಯಾಲ್ಯಾರದೋ ಮಾತುಗಳನ್ನು ಕೇಳ್ಕೊಂಡು ಮನಸೋ ಇಚ್ಚೆ ನರ್ತಿಸೋದು, ತನ್ನದೇ ನಡೆಯಬೇಕೆನ್ನುವ ಸ್ವಪ್ರತಿಷ್ಠೆ, ರೈತ ಮಹಿಳೆಯರನ್ನು, ಕೃಷಿ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡೋದು ಇವೆಲ್ಲ ತಪ್ಪಬೇಕು. ಇಂಥವುಗಳಿಂದಲೇ ರೈತ ಸಂಘಟನೆಗಳು ದುರ್ಬಲ ಆಗಿದ್ದು, ಸಂಘಟನೆ ಶಕ್ತವಾಗಿದ್ದ ಕಾಲದಲ್ಲಿ ಎಂಥೆಂಥ ಹೋರಾಟ ಮಾಡಿದ್ವಿ, ಸಂಘಟನೆ ದುರ್ಬಲ ಆಗ್ತಿದ್ದ ಹಾಗೆ ಎಂತಹ ರೈತ ವಿರೋಧಿ ನಿಲುವುಗಳನ್ನು ಜಾರಿಗೆ ತಂದರೂ ವಿರೋಧಿಸುವುದಕ್ಕೂ ಅಶಕ್ತರಾಜ್ಯ. ರೈತ ಸಂಘಟನೆಯ ಕೂಗು ದೇಶದಾದ್ಯಂತ ಈಗ ಕೇಳ್ತಿದೆಯಲ್ಲ ಅದು ಹೊಸದಲ್ಲ. ಅದು ಇತ್ತು. ಈ ಹೊತ್ತು ಎಲ್ಲರೂ ಒಗ್ಗಟ್ಟಾಗಿದ್ದಾರೆ. ಒಗ್ಗಟ್ಟು ಅನ್ನೋದು ಇಲ್ಲದಿದ್ದರೆ ಯಾವ ಸಂಘಟನೆಯೂ ಉಳಿಯಲ್ಲ. ರೈತರು ಒಗ್ಗಟ್ಟಾದರೆ ರೈತರು ಉಳಿತಾರೆ, ದೇಶನೂ ಉಳಿಯತ್ತೆ…











Reviews
There are no reviews yet.